ಅಮೃತವಚನಗಳು:
1.
ಜಾಗೃತನಾಗು. ಆಲಸ್ಯವನ್ನು ಕಿತ್ತೊಗೆ. ಧರ್ಮಮಾರ್ಗದಲ್ಲೇ ನಡೆ. ಅಧರ್ಮವನ್ನು ಎಂದೂ ಆಚರಿಸದಿರು.
ಜಾಗೃತನಾಗು. ಆಲಸ್ಯವನ್ನು ಕಿತ್ತೊಗೆ. ಧರ್ಮಮಾರ್ಗದಲ್ಲೇ ನಡೆ. ಅಧರ್ಮವನ್ನು ಎಂದೂ ಆಚರಿಸದಿರು.
- ಗೌತಮ ಬುದ್ಧ
2.
ರಾಷ್ಟ್ರವು ಬಲಶಾಲಿಯಾಗುವುದು ಸಣ್ಣಪುಟ್ಟ ವಿಚಾರಗಳನ್ನುಳ್ಳ ದೊಡ್ಡ ದೊಡ್ಡ ವ್ಯಕ್ತಿಗಳಿಂದಲ್ಲ; ದೊಡ್ಡ ದೊಡ್ಡ ವಿಚಾರಗಳನ್ನುಳ್ಳ ಸಣ್ಣ ಸಣ್ಣ ವ್ಯಕ್ತಿಗಳಿಂದ.
ರಾಷ್ಟ್ರವು ಬಲಶಾಲಿಯಾಗುವುದು ಸಣ್ಣಪುಟ್ಟ ವಿಚಾರಗಳನ್ನುಳ್ಳ ದೊಡ್ಡ ದೊಡ್ಡ ವ್ಯಕ್ತಿಗಳಿಂದಲ್ಲ; ದೊಡ್ಡ ದೊಡ್ಡ ವಿಚಾರಗಳನ್ನುಳ್ಳ ಸಣ್ಣ ಸಣ್ಣ ವ್ಯಕ್ತಿಗಳಿಂದ.
- ಸ್ವಾಮಿ ರಾಮತೀರ್ಥ
3.
ನಿನ್ನ ಮುಖ ಪ್ರಕಾಶಮಾನವಾಗಬೇಕೇ? ಸದ್ಗುಣಗಳ ನೀರಿನಲ್ಲಿ ಸ್ನಾನ ಮಾಡು. ಸತ್ಯವೆಂಬ ಸುಗಂಧವನ್ನು ಮೈಗೆ ಹಚ್ಚಿಕೋ.
ನಿನ್ನ ಮುಖ ಪ್ರಕಾಶಮಾನವಾಗಬೇಕೇ? ಸದ್ಗುಣಗಳ ನೀರಿನಲ್ಲಿ ಸ್ನಾನ ಮಾಡು. ಸತ್ಯವೆಂಬ ಸುಗಂಧವನ್ನು ಮೈಗೆ ಹಚ್ಚಿಕೋ.
- ಗುರು ನಾನಕ್
4.
ಮನುಷ್ಯನಾಗಿ ಹುಟ್ಟಿದ ಬಳಿಕ ನಿನ್ನ ಹಿಂದೆ ಅಳಿಸಲಾಗದ ಒಳ್ಳೆಯ ಗುರುತುಗಳನ್ನು ಬಿಟ್ಟು ಇಲ್ಲಿಂದ ನಿರ್ಗಮಿಸು.
ಮನುಷ್ಯನಾಗಿ ಹುಟ್ಟಿದ ಬಳಿಕ ನಿನ್ನ ಹಿಂದೆ ಅಳಿಸಲಾಗದ ಒಳ್ಳೆಯ ಗುರುತುಗಳನ್ನು ಬಿಟ್ಟು ಇಲ್ಲಿಂದ ನಿರ್ಗಮಿಸು.
- ಸ್ವಾಮಿ ವಿವೇಕಾನಂದ
5.
ಎನನ್ನೂ ಬಯಸಬೇಡಿ. ನೀವು ಹೆಚ್ಚು ಕೊಟ್ಟಷ್ಟೂ ನಿಮಗೆ ಹೆಚ್ಚು ಹೆಚ್ಚು ಬರುತ್ತದೆ.
ಎನನ್ನೂ ಬಯಸಬೇಡಿ. ನೀವು ಹೆಚ್ಚು ಕೊಟ್ಟಷ್ಟೂ ನಿಮಗೆ ಹೆಚ್ಚು ಹೆಚ್ಚು ಬರುತ್ತದೆ.
- ಸ್ವಾಮಿ ವಿವೇಕಾನಂದ
6.
ಭಕ್ತಿ ಎಂದರೆ ವ್ಯಾಪಾರವಲ್ಲ. ಅದು ಸಂಪೂರ್ಣ ಆತ್ಮಾರ್ಪಣೆ. ಅದು ಒಮ್ಮುಖದ ದಾರಿ. ಅರ್ಪಿಸುವುದಷ್ಟೇ ನಮ್ಮ ಕೆಲಸ.
ಭಕ್ತಿ ಎಂದರೆ ವ್ಯಾಪಾರವಲ್ಲ. ಅದು ಸಂಪೂರ್ಣ ಆತ್ಮಾರ್ಪಣೆ. ಅದು ಒಮ್ಮುಖದ ದಾರಿ. ಅರ್ಪಿಸುವುದಷ್ಟೇ ನಮ್ಮ ಕೆಲಸ.
- ಪರಮ ಪೂಜನೀಯ ಶ್ರೀ ಗುರೂಜಿ
7.
ಮೊದಲು ನಿನ್ನನ್ನು ನೀ ತಿಳಿ. ಅನಂತರ ದೇವರನ್ನು ನೀನು ತಿಳಿಯುವೆ.
ಮೊದಲು ನಿನ್ನನ್ನು ನೀ ತಿಳಿ. ಅನಂತರ ದೇವರನ್ನು ನೀನು ತಿಳಿಯುವೆ.
- ರಾಮಕೃಷ್ಣ ಪರಮಹಂಸ
8.
ರಾಷ್ಟ್ರವೇ ನಮ್ಮ ದೇವರು. ರಾಷ್ಟ್ರೀಯತೆಯೇ ನಮ್ಮ ಧರ್ಮ. ರಾಷ್ಟ್ರೀಯತೆಗೆ ಸಾವಿಲ್ಲ. ಯಾವುದೇ ಶಸ್ತ್ರಾಸ್ತ್ರಗಳಿಂದಲೂ ಅದನ್ನು ನಾಶಪಡಿಸಲು ಸಾಧ್ಯವಿಲ್ಲ.
ರಾಷ್ಟ್ರವೇ ನಮ್ಮ ದೇವರು. ರಾಷ್ಟ್ರೀಯತೆಯೇ ನಮ್ಮ ಧರ್ಮ. ರಾಷ್ಟ್ರೀಯತೆಗೆ ಸಾವಿಲ್ಲ. ಯಾವುದೇ ಶಸ್ತ್ರಾಸ್ತ್ರಗಳಿಂದಲೂ ಅದನ್ನು ನಾಶಪಡಿಸಲು ಸಾಧ್ಯವಿಲ್ಲ.
- ಯೋಗಿ ಆರವಿಂದ
9.
ಶೀಲವೆಂಬುದು ಅಲುಗದ ಆಧಾರ. ಅದನ್ನು ಹಿಡಿದು ನಿಂತವನನ್ನು ಜಗತ್ತಿನ ಯಾವ ಶಕ್ತಿಯೂ ಕದಲಿಸಲಾರದು.
ಶೀಲವೆಂಬುದು ಅಲುಗದ ಆಧಾರ. ಅದನ್ನು ಹಿಡಿದು ನಿಂತವನನ್ನು ಜಗತ್ತಿನ ಯಾವ ಶಕ್ತಿಯೂ ಕದಲಿಸಲಾರದು.
- ಡಾ|| ರಾಜೇಂದ್ರ ಪ್ರಸಾದ್
10.
ಸರ್ವಪ್ರಯತ್ನದಿಂದ ತನ್ನ ದುರ್ಬಲತೆಯನ್ನು ತೊಡೆದುಹಾಕಿ ಬಲಿಷ್ಠವಾಗುವುದೇ ದುರ್ಬಲ ಸಮಾಜವೊಂದರ ಅತಿ ಶ್ರೇಷ್ಠ ಕರ್ತವ್ಯ.
ಸರ್ವಪ್ರಯತ್ನದಿಂದ ತನ್ನ ದುರ್ಬಲತೆಯನ್ನು ತೊಡೆದುಹಾಕಿ ಬಲಿಷ್ಠವಾಗುವುದೇ ದುರ್ಬಲ ಸಮಾಜವೊಂದರ ಅತಿ ಶ್ರೇಷ್ಠ ಕರ್ತವ್ಯ.
- ಪರಮ ಪೂಜನೀಯ ಡಾಕ್ಟರ್ಜಿ
11.
ಈ ದೇಶ ಜೀವಂತ. ಚೇತನಾಮಯ. ಇದು ಬರಿಯ ಕಲ್ಲು ಮಣ್ಣಿನ ರಾಶಿ ಅಲ್ಲ, ಜಗಜ್ಜನನಿಯ ಮೂರ್ತಸ್ವರೂಪ.
ಈ ದೇಶ ಜೀವಂತ. ಚೇತನಾಮಯ. ಇದು ಬರಿಯ ಕಲ್ಲು ಮಣ್ಣಿನ ರಾಶಿ ಅಲ್ಲ, ಜಗಜ್ಜನನಿಯ ಮೂರ್ತಸ್ವರೂಪ.
- ಯೋಗಿ ಅರವಿಂದ
12.
ಹೇ ಭಗವಂತ, ನಾನು ಮುಕ್ತಿಯನ್ನು ಬೇಡುವುದಿಲ್ಲ. ನಾನು ಪ್ರೀತಿಸುವ ಈ ಜನರಿಗಾಗಿ ಬದುಕುವಂತೆ, ಶ್ರಮಿಸುವಂತೆ ನನಗೆ ಅವಕಾಶ ಮಾಡಿಕೊಡು.
ಹೇ ಭಗವಂತ, ನಾನು ಮುಕ್ತಿಯನ್ನು ಬೇಡುವುದಿಲ್ಲ. ನಾನು ಪ್ರೀತಿಸುವ ಈ ಜನರಿಗಾಗಿ ಬದುಕುವಂತೆ, ಶ್ರಮಿಸುವಂತೆ ನನಗೆ ಅವಕಾಶ ಮಾಡಿಕೊಡು.
- ಯೋಗಿ ಅರವಿಂದ
13.
ಒಂದೇ ದೇಶ, ಒಬ್ಬನೇ ದೇವರು, ಒಂದೇ ಜಾತಿ, ಒಂದು ಮನ. ಸಹೋದರರೆಲ್ಲ ಒಂದೇ ಕುಲ. ಭೇದ ಬೇಡ.
ಒಂದೇ ದೇಶ, ಒಬ್ಬನೇ ದೇವರು, ಒಂದೇ ಜಾತಿ, ಒಂದು ಮನ. ಸಹೋದರರೆಲ್ಲ ಒಂದೇ ಕುಲ. ಭೇದ ಬೇಡ.
- ವೀರ ಸಾವರ್ಕರ್
14.
ಈ ನಾಡಿಗಿಂತ ನಮಗೆ ಪವಿತ್ರವಾದುದು ಇನ್ನಾವುದೂ ಇಲ್ಲ. ಇಲ್ಲಿನ ಧೂಳಿನ ಕಣಕಣವೂ , ಜಲದ ಹನಿ ಹನಿಯೂ, ಜಡಚೇತನಗಳೆಲ್ಲವೂ ನಮಗೆ ಪವಿತ್ರ.
ಈ ನಾಡಿಗಿಂತ ನಮಗೆ ಪವಿತ್ರವಾದುದು ಇನ್ನಾವುದೂ ಇಲ್ಲ. ಇಲ್ಲಿನ ಧೂಳಿನ ಕಣಕಣವೂ , ಜಲದ ಹನಿ ಹನಿಯೂ, ಜಡಚೇತನಗಳೆಲ್ಲವೂ ನಮಗೆ ಪವಿತ್ರ.
- ಪರಮ ಪೂಜನೀಯ ಶ್ರೀ ಗುರೂಜಿ
15.
ಸಣ್ಣ ಸಣ್ಣ ಕೆಲಸಗಳ ಬಗ್ಗೆ ತುಂಬಾ ಗಮನವಹಿಸಿ. ಆಗ ಅಗಾಧ ಕಾರ್ಯಗಳು ತನ್ನಿಂದ ತಾನೇ ಆಗಿಬಿಡುತ್ತವೆ.
ಸಣ್ಣ ಸಣ್ಣ ಕೆಲಸಗಳ ಬಗ್ಗೆ ತುಂಬಾ ಗಮನವಹಿಸಿ. ಆಗ ಅಗಾಧ ಕಾರ್ಯಗಳು ತನ್ನಿಂದ ತಾನೇ ಆಗಿಬಿಡುತ್ತವೆ.
- ಪರಮ ಪೂಜನೀಯ ಶ್ರೀ ಗುರೂಜಿ
16.
ಅನ್ಯಾಯದೊಡನೆ ರಾಜಿ ಮಾಡಿಕೊಳ್ಳುವುದಕ್ಕಿಂತ ಹೆಚ್ಚಿನ ಅಪರಾಧ ಇನ್ನೊಂದಿಲ್ಲ.
ಅನ್ಯಾಯದೊಡನೆ ರಾಜಿ ಮಾಡಿಕೊಳ್ಳುವುದಕ್ಕಿಂತ ಹೆಚ್ಚಿನ ಅಪರಾಧ ಇನ್ನೊಂದಿಲ್ಲ.
- ಸುಭಾಷ್ ಚಂದ್ರ ಬೋಸ್
17.
ಕಣ್ಣಿಗೆ ಕಾಣುವ ನಿನ್ನ ಸೋದರರನ್ನು ಪ್ರೀತಿಸದ ನೀನು ಕಾಣದ ದೇವರನ್ನು ಹೇಗೆ ಪ್ರೀತಿಸಬಲ್ಲೆ.
ಕಣ್ಣಿಗೆ ಕಾಣುವ ನಿನ್ನ ಸೋದರರನ್ನು ಪ್ರೀತಿಸದ ನೀನು ಕಾಣದ ದೇವರನ್ನು ಹೇಗೆ ಪ್ರೀತಿಸಬಲ್ಲೆ.
- ಸ್ವಾಮಿ ವಿವೇಕಾನಂದ
18.
ಸತ್ಯದ ನಿರಂತರ ಅನ್ವೇಷಣೆಯೇ ಹಿಂದು ಧರ್ಮ.
ಸತ್ಯದ ನಿರಂತರ ಅನ್ವೇಷಣೆಯೇ ಹಿಂದು ಧರ್ಮ.
- ಮಹಾತ್ಮಾ ಗಾಂಧೀಜಿ
19.
ನಿಜವಾದ ದೇಶಭಕ್ತನು ತನ್ನೆಲ್ಲಾ ದೇಶವಾಸಿಗಳಲ್ಲಿ ತನ್ನನ್ನೂ, ತನ್ನಲ್ಲಿ ಎಲ್ಲಾ ದೇಶವಾಸಿಗಳನ್ನು ನೋಡುತ್ತಾನೆ.
ನಿಜವಾದ ದೇಶಭಕ್ತನು ತನ್ನೆಲ್ಲಾ ದೇಶವಾಸಿಗಳಲ್ಲಿ ತನ್ನನ್ನೂ, ತನ್ನಲ್ಲಿ ಎಲ್ಲಾ ದೇಶವಾಸಿಗಳನ್ನು ನೋಡುತ್ತಾನೆ.
- ಪಂಡಿತ ದೀನದಯಾಳ ಉಪಾಧ್ಯಾಯ
20.
ಶ್ರದ್ಧೆ ಮತ್ತು ಭಕ್ತಿ ಇಲ್ಲದ ಕೆಲಸವು ಸುವಾಸನೆ ಇಲ್ಲದ ಕೃತಕ ಹೂವಿನಂತೆ.
ಶ್ರದ್ಧೆ ಮತ್ತು ಭಕ್ತಿ ಇಲ್ಲದ ಕೆಲಸವು ಸುವಾಸನೆ ಇಲ್ಲದ ಕೃತಕ ಹೂವಿನಂತೆ.
- ಸ್ವಾಮಿ ಚಿನ್ಮಯಾನಂದ
21.
ಮನುಷ್ಯರೆಲ್ಲ ಒಂದೇ ಜಾತಿ. ಎಲ್ಲರೂ ದೇವರ ಮಕ್ಕಳೇ.
ಮನುಷ್ಯರೆಲ್ಲ ಒಂದೇ ಜಾತಿ. ಎಲ್ಲರೂ ದೇವರ ಮಕ್ಕಳೇ.
- ನಾರಾಯಣ ಗುರು
22.
ಪರಿಸ್ಥಿತಿಯನ್ನು ಕಾಲಕೆಳಗೆ ಮೆಟ್ಟಿ ನಿಲ್ಲಬಲ್ಲವನೇ ಪುರುಷನಾಗಲು ತಕ್ಕವನು. ಆತ್ಮಬಲಿದಾನಕ್ಕೆ ಸಿದ್ಧರಾಗಿ. ಮೃತ್ಯುವನ್ನು ಕಡೆಗಣಿಸಿ. ನಿರ್ಭಯತೆ ಗಳಿಸಿ. ಭಾರತವೊಂದೇ ನಿಮ್ಮ ಆರಾಧ್ಯ ದೈವ ಆಗಲಿ.
ಪರಿಸ್ಥಿತಿಯನ್ನು ಕಾಲಕೆಳಗೆ ಮೆಟ್ಟಿ ನಿಲ್ಲಬಲ್ಲವನೇ ಪುರುಷನಾಗಲು ತಕ್ಕವನು. ಆತ್ಮಬಲಿದಾನಕ್ಕೆ ಸಿದ್ಧರಾಗಿ. ಮೃತ್ಯುವನ್ನು ಕಡೆಗಣಿಸಿ. ನಿರ್ಭಯತೆ ಗಳಿಸಿ. ಭಾರತವೊಂದೇ ನಿಮ್ಮ ಆರಾಧ್ಯ ದೈವ ಆಗಲಿ.
- ಭಗಿನಿ ನಿವೇದಿತಾ
23.
ಎಲ್ಲಿ ಅಹಂಕಾರವಿದೆಯೋ ಅಲ್ಲಿ ಧ್ಯೇಯವಾದವು ಇರುವುದಿಲ್ಲ ಮಾತ್ರವಲ್ಲ. ಭಗವಂತನೂ ಇರುವುದಿಲ್ಲ.
ಎಲ್ಲಿ ಅಹಂಕಾರವಿದೆಯೋ ಅಲ್ಲಿ ಧ್ಯೇಯವಾದವು ಇರುವುದಿಲ್ಲ ಮಾತ್ರವಲ್ಲ. ಭಗವಂತನೂ ಇರುವುದಿಲ್ಲ.
- ದತ್ತೋಪಂತ ಠೇಂಗಡಿ
24.
ಯಾವುದೇ ವೃತ್ತಿ - ವ್ಯವಹಾರಗಳಲ್ಲಿ ಯಶಸ್ವಿಯಾಗುವುದು ವ್ಯಕ್ತಿಯ ಸಾಮರ್ಥ್ಯ, ವ್ಯಕ್ತಿತ್ವ, ಪ್ರಾಮಾಣಿಕತೆ ಮತ್ತು ಮುಂದಾಲೋಚನೆಗಳನ್ನು ಆಧರಿಸಿರುತ್ತದೆ.
ಯಾವುದೇ ವೃತ್ತಿ - ವ್ಯವಹಾರಗಳಲ್ಲಿ ಯಶಸ್ವಿಯಾಗುವುದು ವ್ಯಕ್ತಿಯ ಸಾಮರ್ಥ್ಯ, ವ್ಯಕ್ತಿತ್ವ, ಪ್ರಾಮಾಣಿಕತೆ ಮತ್ತು ಮುಂದಾಲೋಚನೆಗಳನ್ನು ಆಧರಿಸಿರುತ್ತದೆ.
- ಮೋಕ್ಷಗುಂಡಂ ವಿಶ್ವೇಶ್ವರಯ್ಯ
25.
ಅಸ್ಪೃಶ್ಯತೆ ತಪ್ಪಲ್ಲವಾದಲ್ಲಿ ಜಗತ್ತಿನಲ್ಲಿ ಇನ್ನಾವುದೂ ತಪ್ಪಲ್ಲ.
ಅಸ್ಪೃಶ್ಯತೆ ತಪ್ಪಲ್ಲವಾದಲ್ಲಿ ಜಗತ್ತಿನಲ್ಲಿ ಇನ್ನಾವುದೂ ತಪ್ಪಲ್ಲ.
- ಶ್ರೀ ಬಾಳಾಸಾಹೇಬ್ ದೇವರಸ್
26.
ಪರರಿಗೆ ಸಂತೋಷ, ಶಾಂತಿಯನ್ನುಂಟು ಮಾಡುವ ಒಂದು ಮಾತೂ ಅತ್ಯಂತ ಶ್ರೇಷ್ಠ.
ಪರರಿಗೆ ಸಂತೋಷ, ಶಾಂತಿಯನ್ನುಂಟು ಮಾಡುವ ಒಂದು ಮಾತೂ ಅತ್ಯಂತ ಶ್ರೇಷ್ಠ.
- ಗೌತಮ ಬುದ್ಧ
27.
ಕೇವಲ ಪ್ರಾರ್ಥಿಸುವ ತುಟಿಗಳಿಗಿಂತ ಸೇವೆ ಮಾಡುವ ಕೈಗಳು ನೂರುಪಟ್ಟು ಮೇಲು
ಕೇವಲ ಪ್ರಾರ್ಥಿಸುವ ತುಟಿಗಳಿಗಿಂತ ಸೇವೆ ಮಾಡುವ ಕೈಗಳು ನೂರುಪಟ್ಟು ಮೇಲು
- ಮಹಾತ್ಮಾ ಗಾಂಧೀಜಿ
30.
ನಮ್ಮದನ್ನು ಕೈಬಿಟ್ಟು ಪರದೇಶದ ಸಂಗತಿಗಳಿಗಾಗಿ ಹಾತೊರೆಯುವುದು ಸೋಮಾರಿ ಮತ್ತು ಭಿಕಾರಿಗಳ ಲಕ್ಷಣ.
ನಮ್ಮದನ್ನು ಕೈಬಿಟ್ಟು ಪರದೇಶದ ಸಂಗತಿಗಳಿಗಾಗಿ ಹಾತೊರೆಯುವುದು ಸೋಮಾರಿ ಮತ್ತು ಭಿಕಾರಿಗಳ ಲಕ್ಷಣ.
- ರವೀಂದ್ರನಾಥ ಠಾಗೋರ್
31.
ಇನ್ನೊಬ್ಬರನ್ನು ಮಾತಿನಿಂದ ಹಿಂಸಿಸಬಾರದು, ಅಪ್ರಿಯವಾದುದನ್ನು ಆಡಬಾರದು. ಕಠಿಣ ಮಾತುಗಳನ್ನೇ ಆಡುವುದರಿಂದ ಸ್ವಭಾವವು ಕಠೋರವಾಗುತ್ತದೆ.
ಇನ್ನೊಬ್ಬರನ್ನು ಮಾತಿನಿಂದ ಹಿಂಸಿಸಬಾರದು, ಅಪ್ರಿಯವಾದುದನ್ನು ಆಡಬಾರದು. ಕಠಿಣ ಮಾತುಗಳನ್ನೇ ಆಡುವುದರಿಂದ ಸ್ವಭಾವವು ಕಠೋರವಾಗುತ್ತದೆ.
- ಶಾರದಾ ಮಾತೆ
32.
ಹಿಂದುತ್ವವನ್ನು ಬಿಟ್ಟು ಭಾರತದ ರಾಷ್ಟ್ರೀಯತೆಯು ಬದುಕಿರಲು ಸಾಧ್ಯವಿಲ್ಲ.
ಹಿಂದುತ್ವವನ್ನು ಬಿಟ್ಟು ಭಾರತದ ರಾಷ್ಟ್ರೀಯತೆಯು ಬದುಕಿರಲು ಸಾಧ್ಯವಿಲ್ಲ.
- ಮದನಮೋಹನ ಮಾಳವೀಯ
33.
ವ್ಯಕ್ತಿಯ ಜಾತಿ, ಪಂಥ, ಕುಲವನ್ನು ಯೋಚಿಸದೆ ಅವನಲ್ಲಿರುವ ದೈವೀ ಅಂಶವನ್ನು ಗುರುತಿಸಿ ಅವನ ಸೇವೆ ಮಾಡುವವರಿಗೆ ದೇವರು ಪ್ರಸನ್ನನಾಗುತ್ತನೆ.
ವ್ಯಕ್ತಿಯ ಜಾತಿ, ಪಂಥ, ಕುಲವನ್ನು ಯೋಚಿಸದೆ ಅವನಲ್ಲಿರುವ ದೈವೀ ಅಂಶವನ್ನು ಗುರುತಿಸಿ ಅವನ ಸೇವೆ ಮಾಡುವವರಿಗೆ ದೇವರು ಪ್ರಸನ್ನನಾಗುತ್ತನೆ.
- ಸ್ವಾಮಿ ವಿವೇಕಾನಂದ
34.
ಕತ್ತಲು, ಕತ್ತಲು... ಎಂದು ಕೂಗತೊಡಗಿದರೆ ಕತ್ತಲು ಹೋದೀತೇನು? ಅದೇ, ದೀಪ ತನ್ನಿ; ಕತ್ತಲು ಹೇಗೆ ಮಾಯವಾಗುತ್ತದೆ ನೋಡಿ ! ಮನುಷ್ಯರನ್ನು ಸುಧಾರಿಸುವ ರಹಸ್ಯವೇ ಇದು.
ಕತ್ತಲು, ಕತ್ತಲು... ಎಂದು ಕೂಗತೊಡಗಿದರೆ ಕತ್ತಲು ಹೋದೀತೇನು? ಅದೇ, ದೀಪ ತನ್ನಿ; ಕತ್ತಲು ಹೇಗೆ ಮಾಯವಾಗುತ್ತದೆ ನೋಡಿ ! ಮನುಷ್ಯರನ್ನು ಸುಧಾರಿಸುವ ರಹಸ್ಯವೇ ಇದು.
- ಸ್ವಾಮಿ ವಿವೇಕಾನಂದ
35.
ತಾನೂ ಉತ್ತಮನಾಗಿ ಮತ್ತೊಬ್ಬರನ್ನೂ ಉತ್ತಮನ್ನಾಗಿ ಮಾಡುವವನೇ ಉತ್ತಮ ಮಾನವನಾಗುತ್ತಾನೆ.
ತಾನೂ ಉತ್ತಮನಾಗಿ ಮತ್ತೊಬ್ಬರನ್ನೂ ಉತ್ತಮನ್ನಾಗಿ ಮಾಡುವವನೇ ಉತ್ತಮ ಮಾನವನಾಗುತ್ತಾನೆ.
- ಸ್ವಾಮಿ ವಿವೇಕಾನಂದ
36.
ಚಲಿಸುವುದೇ ಬಾಳು, ನಿಲ್ಲುವುದು ಸಾವು.
ಚಲಿಸುವುದೇ ಬಾಳು, ನಿಲ್ಲುವುದು ಸಾವು.
- ಕುವೆಂಪು
jayakumarcsj@gmail.com
ಪ್ರತ್ಯುತ್ತರಅಳಿಸಿಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
ನಮಸ್ತೆ...ಅಮೃತವಚನಗಳ ಸಂಗ್ರಹ ತುಂಬಾ ಚೆನ್ನಾಗಿದೆ. ಉಳಿದ ಅಮೃತವಚನಳನ್ನು ಸೇರಿಸಲು ಆಸಕ್ತರಿಗೆ ಅವಕಾಶ ಕೊಡಿ. ಸಂಗ್ರಹ ಹೆಚ್ಚಾಗಬಹುದು. ಅನೇಕರಿಗೆ ಇದು ಸಹಾಯವಾಗಬಗಬಹುದು... ಧನ್ಯವಾದ
ಪ್ರತ್ಯುತ್ತರಅಳಿಸಿ