ನನ್ನ ಬ್ಲಾಗ್ ಪಟ್ಟಿ

ಗುರುವಾರ, ಜುಲೈ 19, 2012

ಅಮೃತವಚನ 2 : Amritavachana 2

ಅಮೃತವಚನಗಳು:


37.
ಗುರುಪೂಜೆಯೆಂದರೆ ಸತ್ಯದ ಪೂಜೆ, ಜ್ಞಾನದ ಪೂಜೆ, ಅನುಭವದ ಪೂಜೆ, ವಿಚಾರದ ಪೂಜೆ
- ಸಾನೆ ಗುರೂಜಿ

38.
ನಮಗಿಂದು ಬೇಕಾಗಿರುವುದು ಜೀವನ ಸಂಗ್ರಾಮದಲ್ಲಿ ಹೋರಾಡುತ್ತಿರುವ ಯೋಧನ ಕೆಚ್ಚೆದೆಯ ಭಾವ. ಜೀವನವನ್ನು ಭೋಗೋದ್ಯಾನದಂತೆ ನೋಡುವ ವಿಲಾಸಿಯ ಭಾವವಲ್ಲ
- ಸ್ವಾಮಿ ವಿವೇಕಾನಂದ

39.
ಕಾರ್ಯವೊಂದರ ಗುರಿಯು ಶ್ರೇಷ್ಠವಾಗಿದ್ದರಷ್ಟೇ ಸಾಲದು. ಅದನ್ನು ಸಾಧಿಸಹೊರಡುವವರಲ್ಲಿ ಬಲಿಷ್ಠ ಹೃದಯಗಳೂ ಬಲವಾದ ತೋಳುಗಳೂ ಬೇಕು
- ಪರಮ ಪೂಜನೀಯ ಡಾಕ್ಟರ್‌ಜಿ

40.
ಸಮಾಜಕ್ಕೆ ಏನೂ ಕೊಡದೆ ಅದರಿಂದ ಕೇವಲ ಪಡೆಯುತ್ತಾ ಹೋದರೆ ಅದು ದುರ್ಬಲವಾಗುತ್ತದೆ. ಆದ್ದರಿಂದ ಸಮಾಜಕ್ಕೆ ಸಲ್ಲಿಸಬೇಕಾದುದು ಪ್ರತೀ ವ್ಯಕ್ತಿಯ ಆದ್ಯ ಕರ್ತವ್ಯ.
- ಪಂಡಿತ ದೀನದಯಾಳ ಉಪಾಧ್ಯಾಯ

41.
ಈ ನಾಡಿಗಿಂತ ನಮಗೆ ಪವಿತ್ರವಾದುದು ಇನ್ನಾವುದೂ ಇಲ್ಲ. ಇಲ್ಲಿನ ಧೂಳಿನ ಕಣ ಕಣವೂ, ಜಲದ ಹನಿ ಹನಿಯೂ, ಜಡಚೇತನಗಳೆಲ್ಲವೂ ನಮಗೆ ಪವಿತ್ರ.
- ಪರಮ ಪೂಜನೀಯ ಶ್ರೀ ಗುರೂಜಿ

42.
ವೀರಾತ್ಮರೇ, ಧೀರರಾಗಿ, ನೆಚ್ಚುಗೆಡದಿರಿ. ಭಾರತೀಯರು ನಾವು ಎಂದು ಹೆಮ್ಮೆ ತಾಳಿ. ಸಾರಿ ಹೇಳಿ, ಭಾರತೀಯರು ನಾವು, ಭಾರತೀಯರೆಲ್ಲ ನಮ್ಮ ಸಹೋದರರು.
- ಸ್ವಾಮಿ ವಿವೇಕಾನಂದ

43.
ರಾಷ್ಟ್ರವೇ ನಮ್ಮ ದೇವರು, ರಾಷ್ಟ್ರೀಯತೆಯೇ ನಮ್ಮ ಧರ್ಮ, ರಾಷ್ಟ್ರೀಯತೆಗೆ ಸಾವಿಲ್ಲ. ಯಾವುದೇ ಶಸ್ತ್ರಾಸ್ತ್ರಗಳಿಂದಲೂ ಅದನ್ನು ನಾಶಪಡಿಸಲು ಸಾಧ್ಯವಿಲ್ಲ.
- ಯೋಗಿ ಅರವಿಂದ

44.
ನಾವು ಮಾಡುವಂತಹ ಕಾರ್ಯದಲ್ಲಿ ನಮ್ಮ ಮನಸ್ಸು, ಹೃದಯದ ಭಾವನೆಗಳು ತುಂಬಿದ್ದಲ್ಲಿ, ಯಾಂತ್ರಿಕತೆ ಅನುಭವವುಂಟಾಗುವುದೇ ಇಲ್ಲ, ಬದಲಾಗಿ ವರ್ಷ ಕಳೆದಂತೆ ಅದರಲ್ಲಿ ಹುರುಪು-ಉತ್ಸಾಹ ಹೆಚ್ಚುತಲೇ ಇರುತ್ತದೆ.
- ಯಾದವರಾವ್ ಜೋಷಿ

45.
ಪರಿಶುದ್ಧತೆ, ತಾಳ್ಮೆ, ಸತತ ಪ್ರಯತ್ನ - ಇವು ಮೂರು ಜಯಕ್ಕೆ ಅತ್ಯಾವಶ್ಯಕ.
- ಸ್ವಾಮಿ ವಿವೇಕಾನಂದ

46.
ಸೂರ್ಯನು ಹೋದನೆಂದು ನೀವು ಅಳುತ್ತಾ ಕುಳಿತರೆ ನಕ್ಷತ್ರಗಳನ್ನು ನೋಡುವ ಭಾಗ್ಯವನ್ನು ಕಳೆದುಕೊಳ್ಳುತ್ತೀರಿ.
- ರವೀಂದ್ರನಾಥ ಠಾಗೋರ್

47.
ಅಯ್ಯಾ ಎಂದರೆ ಸ್ವರ್ಗ, ’ಎಲವೋ ಎಂದರೆ ನರಕ.
- ಬಸವಣ್ಣ

48.
ವಿದ್ಯಾಭ್ಯಾಸದ ತಿರುಳು ಇರುವುದು ಉತ್ತಮನಾದ ಜೀವನ ನಡೆಸುವುದರಲ್ಲಿ.
- ಮಹಾತ್ಮಾ ಗಾಂಧೀಜಿ

49.
ಭವಿಷ್ಯದ ಬಗ್ಗೆ ಹೆದರದಿರಿ. ಅದರ ನಿರ್ಮಾಣದಲ್ಲಿ ಆಸಕ್ತಿ ತಳೆಯಿರಿ. ಕನಸುಗಳನ್ನು ನನಸಾಗಿಸಿ, ಕಲ್ಪನೆಯನ್ನು ಕೃತಿ ರೂಪದಲ್ಲಿಳಿಸಿ.
- ಪಂಡಿತ ದೀನದಯಾಳ ಉಪಾಧ್ಯಾಯ

50.
ಒಂದು ಆದರ್ಶಕ್ಕೆ ವಿಧೇಯತೆ, ಪ್ರೀತಿ, ಏನು ಬೇಕಾದರೂ ಮಾಡುವ ಸಿದ್ಧತೆ - ಇವು ಮೂರು ನಿಮ್ಮಲ್ಲಿದ್ದರೆ ಯಾವುದೂ ನಿಮ್ಮನ್ನು ತಡೆಯಲಾರದು.
- ಸ್ವಾಮಿ ವಿವೇಕಾನಂದ

51.
ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದು ಮೇಲು.
- ಮೋಕ್ಷಗುಂಡಂ ವಿಶ್ವೇಶ್ವರಯ್ಯ

52.
ಯಾವ ವ್ಯಕ್ತಿಯ ನರನಾಡಿಗಳಲ್ಲಿ ತನ್ನ ರಾಷ್ಟ್ರದೊಡನೆ ಸಮರಸತೆಯ ಭಾವನೆಯು ಮಿಡಿಯುವುದಿಲ್ಲವೋ ಅಂಥವನಿಗೆ ಸರ್ವಾಂತರ್ಯಾಮಿಯಾದ ದೇವರು ಎಂದೂ ಸಿಗಲಾರ.
- ಸ್ವಾಮಿ ರಾಮತೀರ್ಥ

53.
ಎಲ್ಲಿ ಅಹಂಕಾರವಿದೆಯೋ ಅಲ್ಲಿ ಧ್ಯೇಯವಾದವು ಇರುವುದಿಲ್ಲ. ಮಾತ್ರವಲ್ಲ ಭಗವಂತನೂ ಇರುವುದಿಲ್ಲ.
- ದತ್ತೋಪಂತ ಠೇಂಗಡಿ

54.
ಶಾಖೆ ಎಂಬುದು ಕೇವಲ ಮಾತಿನ ಒಣ ಉಪದೇಶಗಳ ಕಂತೆಯಲ್ಲ; ಸಿದ್ಧಾಂತಗಳ ಸಜೀವ ನಡೆವಳಿಕೆ.
- ಪರಮ ಪೂಜನೀಯ ಶ್ರೀ ಗುರೂಜಿ

55.
ಸುಳ್ಳು ಹೇಳದಿರು. ಸತ್ಯಸಂಧನಾಗು. ವಿವೇಕದಿಂದ, ನಿರ್ಭೀತಿಯಿಂದ ಹಾಗೂ ಪ್ರೀತಿ ತುಂಬಿದ ಹೃದಯದಿಂದ ಸತ್ಯವನ್ನೇ ನುಡಿ.
- ಗೌತಮ ಬುದ್ಧ

56.
ಮನಸ್ಸಿನ ಕೊಳೆಯನ್ನು ತೊಳೆಯುವುದೇ ಧರ್ಮ.
- ಡಾ|| ಅಂಬೇಡ್ಕರ್

57.
ಸಂತತಿಯಿಂದಲ್ಲ, ಧನದಿಂದಲ್ಲ, ತ್ಯಾಗದಿಂದ ಮಾತ್ರ ಅಮೃತತ್ವವನ್ನು ಪಡೆಯಲು ಸಾಧ್ಯ.
- ಸ್ವಾಮಿ ವಿವೇಕಾನಂದ

58.
ಯಾರು ದೀನರಲ್ಲಿ, ದುರ್ಬಲರಲ್ಲಿ, ರೋಗಿಗಳಲ್ಲಿ ಶಿವನನ್ನು ನೋಡುವರೋ ಅವರೇ ನಿಜವಾದ ಶಿವನನ್ನು ಪೂಜಿಸುವವರು.
- ಸ್ವಾಮಿ ವಿವೇಕಾನಂದ

59.
ನಿನ್ನ ಮಾತು, ನಡತೆ ಹಾಗೂ ಸಾಧನೆ ಇವುಗಳಲ್ಲಿ ಪ್ರಾಮಾಣಿಕನಾಗಿರು. ಇದರಿಂದ ನೀನು ಧನ್ಯನಾಗುವೆ.
- ಶಾರದಾ ಮಾತೆ

60.
ದೊಡ್ಡ ಮನಸ್ಸಿನಿಂದ ಮಾಡಿದ ಸಣ್ಣ ಕಾರ್ಯಗಳೂ ಸಣ್ಣ ಮನಸ್ಸಿನಿಂದ ಮಾಡಿದ ದೊಡ್ಡ ಕಾರ್ಯಗಳಿಗಿಂತ ಎಷ್ಟೋ ಶ್ರೇಷ್ಠವಾದವು
- ಕುವೆಂಪು

61.
"ಹೇ ಗೌರೀನಾಥ, ಹೇ ಜಗನ್ಮಾತೆ, ಪೌರುಷವನ್ನು ಎಮಗೆ ದಯಪಾಲಿಸು. ಹೇ ಸರ್ವಶಕ್ತಿಶಾಲಿನಿ, ನಮ್ಮ ದೌರ್ಬಲ್ಯವನ್ನು ದಹಿಸು, ಕ್ಲೈಬ್ಯವನ್ನು ಹೋಗಲಾಡಿಸು. ನಮ್ಮ ಷಂಡತನವನ್ನು ತೊಲಗಿಸು, ಪುರುಷಸಿಂಹರನ್ನಾಗಿ ಮಾಡು."
- ಸ್ವಾಮಿ ವಿವೇಕಾನಂದ

62.
ಸರ್ವ ಪ್ರಯತ್ನದಿಂದ ತನ್ನ ದುರ್ಬಲತೆಯನ್ನು ತೊಡೆದು ಹಾಕಿ ಬಲಿಷ್ಠವಾಗುವುದೇ ದುರ್ಬಲ ಸಮಾಜವೊಂದರ ಅತಿ ಶ್ರೇಷ್ಠ ಕರ್ತವ್ಯ.
- ಪರಮ ಪೂಜನೀಯ ಡಾಕ್ಟರ್‌ಜಿ

63.
ಈ ನಶ್ವರ ಜಗತ್ತಿನಲ್ಲಿ ಎಲ್ಲವೂ ನಶಿಸಬಹುದು. ಆದರೆ ಭಾವನೆಗಳು, ಕನಸುಗಳು, ವಿಚಾರಗಳು ಎಂದೂ ಸಾಯಲಾರವು.
- ನೇತಾಜಿ ಸುಭಾಷ್‌ಚಂದ್ರ ಬೋಸ್

64.
ಹುಡುಕಿ ಹುಡುಕಿ ಒಳ್ಳೆಯ ಮಾತನ್ನೇ ಆಡಬೇಕು. ಅದನ್ನು ಹಿತವಾಗುವಂತೆ ಹೇಳಬೇಕು. ಇದೇ ಧರ್ಮ
- ತಿರುವಳ್ಳೂವರ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ