ಅಮೃತವಚನಗಳು:
37.
ಗುರುಪೂಜೆಯೆಂದರೆ ಸತ್ಯದ ಪೂಜೆ, ಜ್ಞಾನದ ಪೂಜೆ, ಅನುಭವದ ಪೂಜೆ, ವಿಚಾರದ ಪೂಜೆ
-
ಸಾನೆ ಗುರೂಜಿ
38.
ನಮಗಿಂದು ಬೇಕಾಗಿರುವುದು ಜೀವನ ಸಂಗ್ರಾಮದಲ್ಲಿ ಹೋರಾಡುತ್ತಿರುವ ಯೋಧನ ಕೆಚ್ಚೆದೆಯ ಭಾವ. ಜೀವನವನ್ನು ಭೋಗೋದ್ಯಾನದಂತೆ ನೋಡುವ ವಿಲಾಸಿಯ ಭಾವವಲ್ಲ
ನಮಗಿಂದು ಬೇಕಾಗಿರುವುದು ಜೀವನ ಸಂಗ್ರಾಮದಲ್ಲಿ ಹೋರಾಡುತ್ತಿರುವ ಯೋಧನ ಕೆಚ್ಚೆದೆಯ ಭಾವ. ಜೀವನವನ್ನು ಭೋಗೋದ್ಯಾನದಂತೆ ನೋಡುವ ವಿಲಾಸಿಯ ಭಾವವಲ್ಲ
-
ಸ್ವಾಮಿ ವಿವೇಕಾನಂದ
39.
ಕಾರ್ಯವೊಂದರ ಗುರಿಯು ಶ್ರೇಷ್ಠವಾಗಿದ್ದರಷ್ಟೇ ಸಾಲದು. ಅದನ್ನು ಸಾಧಿಸಹೊರಡುವವರಲ್ಲಿ ಬಲಿಷ್ಠ ಹೃದಯಗಳೂ ಬಲವಾದ ತೋಳುಗಳೂ ಬೇಕು
ಕಾರ್ಯವೊಂದರ ಗುರಿಯು ಶ್ರೇಷ್ಠವಾಗಿದ್ದರಷ್ಟೇ ಸಾಲದು. ಅದನ್ನು ಸಾಧಿಸಹೊರಡುವವರಲ್ಲಿ ಬಲಿಷ್ಠ ಹೃದಯಗಳೂ ಬಲವಾದ ತೋಳುಗಳೂ ಬೇಕು
-
ಪರಮ ಪೂಜನೀಯ ಡಾಕ್ಟರ್ಜಿ
40.
ಸಮಾಜಕ್ಕೆ ಏನೂ ಕೊಡದೆ ಅದರಿಂದ ಕೇವಲ ಪಡೆಯುತ್ತಾ ಹೋದರೆ ಅದು ದುರ್ಬಲವಾಗುತ್ತದೆ. ಆದ್ದರಿಂದ ಸಮಾಜಕ್ಕೆ ಸಲ್ಲಿಸಬೇಕಾದುದು ಪ್ರತೀ ವ್ಯಕ್ತಿಯ ಆದ್ಯ ಕರ್ತವ್ಯ.
ಸಮಾಜಕ್ಕೆ ಏನೂ ಕೊಡದೆ ಅದರಿಂದ ಕೇವಲ ಪಡೆಯುತ್ತಾ ಹೋದರೆ ಅದು ದುರ್ಬಲವಾಗುತ್ತದೆ. ಆದ್ದರಿಂದ ಸಮಾಜಕ್ಕೆ ಸಲ್ಲಿಸಬೇಕಾದುದು ಪ್ರತೀ ವ್ಯಕ್ತಿಯ ಆದ್ಯ ಕರ್ತವ್ಯ.
-
ಪಂಡಿತ ದೀನದಯಾಳ ಉಪಾಧ್ಯಾಯ
41.
ಈ ನಾಡಿಗಿಂತ ನಮಗೆ ಪವಿತ್ರವಾದುದು ಇನ್ನಾವುದೂ ಇಲ್ಲ. ಇಲ್ಲಿನ ಧೂಳಿನ ಕಣ ಕಣವೂ, ಜಲದ ಹನಿ ಹನಿಯೂ, ಜಡಚೇತನಗಳೆಲ್ಲವೂ ನಮಗೆ ಪವಿತ್ರ.
ಈ ನಾಡಿಗಿಂತ ನಮಗೆ ಪವಿತ್ರವಾದುದು ಇನ್ನಾವುದೂ ಇಲ್ಲ. ಇಲ್ಲಿನ ಧೂಳಿನ ಕಣ ಕಣವೂ, ಜಲದ ಹನಿ ಹನಿಯೂ, ಜಡಚೇತನಗಳೆಲ್ಲವೂ ನಮಗೆ ಪವಿತ್ರ.
-
ಪರಮ ಪೂಜನೀಯ ಶ್ರೀ ಗುರೂಜಿ
42.
ವೀರಾತ್ಮರೇ, ಧೀರರಾಗಿ, ನೆಚ್ಚುಗೆಡದಿರಿ. ಭಾರತೀಯರು ನಾವು ಎಂದು ಹೆಮ್ಮೆ ತಾಳಿ. ಸಾರಿ ಹೇಳಿ, ಭಾರತೀಯರು ನಾವು, ಭಾರತೀಯರೆಲ್ಲ ನಮ್ಮ ಸಹೋದರರು.
ವೀರಾತ್ಮರೇ, ಧೀರರಾಗಿ, ನೆಚ್ಚುಗೆಡದಿರಿ. ಭಾರತೀಯರು ನಾವು ಎಂದು ಹೆಮ್ಮೆ ತಾಳಿ. ಸಾರಿ ಹೇಳಿ, ಭಾರತೀಯರು ನಾವು, ಭಾರತೀಯರೆಲ್ಲ ನಮ್ಮ ಸಹೋದರರು.
-
ಸ್ವಾಮಿ ವಿವೇಕಾನಂದ
43.
ರಾಷ್ಟ್ರವೇ ನಮ್ಮ ದೇವರು, ರಾಷ್ಟ್ರೀಯತೆಯೇ ನಮ್ಮ ಧರ್ಮ, ರಾಷ್ಟ್ರೀಯತೆಗೆ ಸಾವಿಲ್ಲ. ಯಾವುದೇ ಶಸ್ತ್ರಾಸ್ತ್ರಗಳಿಂದಲೂ ಅದನ್ನು ನಾಶಪಡಿಸಲು ಸಾಧ್ಯವಿಲ್ಲ.
ರಾಷ್ಟ್ರವೇ ನಮ್ಮ ದೇವರು, ರಾಷ್ಟ್ರೀಯತೆಯೇ ನಮ್ಮ ಧರ್ಮ, ರಾಷ್ಟ್ರೀಯತೆಗೆ ಸಾವಿಲ್ಲ. ಯಾವುದೇ ಶಸ್ತ್ರಾಸ್ತ್ರಗಳಿಂದಲೂ ಅದನ್ನು ನಾಶಪಡಿಸಲು ಸಾಧ್ಯವಿಲ್ಲ.
-
ಯೋಗಿ ಅರವಿಂದ
44.
ನಾವು ಮಾಡುವಂತಹ ಕಾರ್ಯದಲ್ಲಿ ನಮ್ಮ ಮನಸ್ಸು, ಹೃದಯದ ಭಾವನೆಗಳು ತುಂಬಿದ್ದಲ್ಲಿ, ಯಾಂತ್ರಿಕತೆ ಅನುಭವವುಂಟಾಗುವುದೇ ಇಲ್ಲ, ಬದಲಾಗಿ ವರ್ಷ ಕಳೆದಂತೆ ಅದರಲ್ಲಿ ಹುರುಪು-ಉತ್ಸಾಹ ಹೆಚ್ಚುತಲೇ ಇರುತ್ತದೆ.
ನಾವು ಮಾಡುವಂತಹ ಕಾರ್ಯದಲ್ಲಿ ನಮ್ಮ ಮನಸ್ಸು, ಹೃದಯದ ಭಾವನೆಗಳು ತುಂಬಿದ್ದಲ್ಲಿ, ಯಾಂತ್ರಿಕತೆ ಅನುಭವವುಂಟಾಗುವುದೇ ಇಲ್ಲ, ಬದಲಾಗಿ ವರ್ಷ ಕಳೆದಂತೆ ಅದರಲ್ಲಿ ಹುರುಪು-ಉತ್ಸಾಹ ಹೆಚ್ಚುತಲೇ ಇರುತ್ತದೆ.
-
ಯಾದವರಾವ್ ಜೋಷಿ
45.
ಪರಿಶುದ್ಧತೆ, ತಾಳ್ಮೆ, ಸತತ ಪ್ರಯತ್ನ - ಇವು ಮೂರು ಜಯಕ್ಕೆ ಅತ್ಯಾವಶ್ಯಕ.
ಪರಿಶುದ್ಧತೆ, ತಾಳ್ಮೆ, ಸತತ ಪ್ರಯತ್ನ - ಇವು ಮೂರು ಜಯಕ್ಕೆ ಅತ್ಯಾವಶ್ಯಕ.
-
ಸ್ವಾಮಿ ವಿವೇಕಾನಂದ
46.
ಸೂರ್ಯನು ಹೋದನೆಂದು ನೀವು ಅಳುತ್ತಾ ಕುಳಿತರೆ ನಕ್ಷತ್ರಗಳನ್ನು ನೋಡುವ ಭಾಗ್ಯವನ್ನು ಕಳೆದುಕೊಳ್ಳುತ್ತೀರಿ.
ಸೂರ್ಯನು ಹೋದನೆಂದು ನೀವು ಅಳುತ್ತಾ ಕುಳಿತರೆ ನಕ್ಷತ್ರಗಳನ್ನು ನೋಡುವ ಭಾಗ್ಯವನ್ನು ಕಳೆದುಕೊಳ್ಳುತ್ತೀರಿ.
-
ರವೀಂದ್ರನಾಥ ಠಾಗೋರ್
47.
’ಅಯ್ಯಾ’ ಎಂದರೆ ಸ್ವರ್ಗ, ’ಎಲವೋ’ ಎಂದರೆ ನರಕ.
’ಅಯ್ಯಾ’ ಎಂದರೆ ಸ್ವರ್ಗ, ’ಎಲವೋ’ ಎಂದರೆ ನರಕ.
-
ಬಸವಣ್ಣ
48.
ವಿದ್ಯಾಭ್ಯಾಸದ ತಿರುಳು ಇರುವುದು ಉತ್ತಮನಾದ ಜೀವನ ನಡೆಸುವುದರಲ್ಲಿ.
ವಿದ್ಯಾಭ್ಯಾಸದ ತಿರುಳು ಇರುವುದು ಉತ್ತಮನಾದ ಜೀವನ ನಡೆಸುವುದರಲ್ಲಿ.
-
ಮಹಾತ್ಮಾ ಗಾಂಧೀಜಿ
49.
ಭವಿಷ್ಯದ ಬಗ್ಗೆ ಹೆದರದಿರಿ. ಅದರ ನಿರ್ಮಾಣದಲ್ಲಿ ಆಸಕ್ತಿ ತಳೆಯಿರಿ. ಕನಸುಗಳನ್ನು ನನಸಾಗಿಸಿ, ಕಲ್ಪನೆಯನ್ನು ಕೃತಿ ರೂಪದಲ್ಲಿಳಿಸಿ.
ಭವಿಷ್ಯದ ಬಗ್ಗೆ ಹೆದರದಿರಿ. ಅದರ ನಿರ್ಮಾಣದಲ್ಲಿ ಆಸಕ್ತಿ ತಳೆಯಿರಿ. ಕನಸುಗಳನ್ನು ನನಸಾಗಿಸಿ, ಕಲ್ಪನೆಯನ್ನು ಕೃತಿ ರೂಪದಲ್ಲಿಳಿಸಿ.
-
ಪಂಡಿತ ದೀನದಯಾಳ ಉಪಾಧ್ಯಾಯ
50.
ಒಂದು ಆದರ್ಶಕ್ಕೆ ವಿಧೇಯತೆ, ಪ್ರೀತಿ, ಏನು ಬೇಕಾದರೂ ಮಾಡುವ ಸಿದ್ಧತೆ - ಇವು ಮೂರು ನಿಮ್ಮಲ್ಲಿದ್ದರೆ ಯಾವುದೂ ನಿಮ್ಮನ್ನು ತಡೆಯಲಾರದು.
ಒಂದು ಆದರ್ಶಕ್ಕೆ ವಿಧೇಯತೆ, ಪ್ರೀತಿ, ಏನು ಬೇಕಾದರೂ ಮಾಡುವ ಸಿದ್ಧತೆ - ಇವು ಮೂರು ನಿಮ್ಮಲ್ಲಿದ್ದರೆ ಯಾವುದೂ ನಿಮ್ಮನ್ನು ತಡೆಯಲಾರದು.
-
ಸ್ವಾಮಿ ವಿವೇಕಾನಂದ
51.
ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದು ಮೇಲು.
ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದು ಮೇಲು.
-
ಮೋಕ್ಷಗುಂಡಂ ವಿಶ್ವೇಶ್ವರಯ್ಯ
52.
ಯಾವ ವ್ಯಕ್ತಿಯ ನರನಾಡಿಗಳಲ್ಲಿ ತನ್ನ ರಾಷ್ಟ್ರದೊಡನೆ ಸಮರಸತೆಯ ಭಾವನೆಯು ಮಿಡಿಯುವುದಿಲ್ಲವೋ ಅಂಥವನಿಗೆ ಸರ್ವಾಂತರ್ಯಾಮಿಯಾದ ದೇವರು ಎಂದೂ ಸಿಗಲಾರ.
ಯಾವ ವ್ಯಕ್ತಿಯ ನರನಾಡಿಗಳಲ್ಲಿ ತನ್ನ ರಾಷ್ಟ್ರದೊಡನೆ ಸಮರಸತೆಯ ಭಾವನೆಯು ಮಿಡಿಯುವುದಿಲ್ಲವೋ ಅಂಥವನಿಗೆ ಸರ್ವಾಂತರ್ಯಾಮಿಯಾದ ದೇವರು ಎಂದೂ ಸಿಗಲಾರ.
-
ಸ್ವಾಮಿ ರಾಮತೀರ್ಥ
53.
ಎಲ್ಲಿ ಅಹಂಕಾರವಿದೆಯೋ ಅಲ್ಲಿ ಧ್ಯೇಯವಾದವು ಇರುವುದಿಲ್ಲ. ಮಾತ್ರವಲ್ಲ ಭಗವಂತನೂ ಇರುವುದಿಲ್ಲ.
ಎಲ್ಲಿ ಅಹಂಕಾರವಿದೆಯೋ ಅಲ್ಲಿ ಧ್ಯೇಯವಾದವು ಇರುವುದಿಲ್ಲ. ಮಾತ್ರವಲ್ಲ ಭಗವಂತನೂ ಇರುವುದಿಲ್ಲ.
-
ದತ್ತೋಪಂತ ಠೇಂಗಡಿ
54.
ಶಾಖೆ ಎಂಬುದು ಕೇವಲ ಮಾತಿನ ಒಣ ಉಪದೇಶಗಳ ಕಂತೆಯಲ್ಲ; ಸಿದ್ಧಾಂತಗಳ ಸಜೀವ ನಡೆವಳಿಕೆ.
ಶಾಖೆ ಎಂಬುದು ಕೇವಲ ಮಾತಿನ ಒಣ ಉಪದೇಶಗಳ ಕಂತೆಯಲ್ಲ; ಸಿದ್ಧಾಂತಗಳ ಸಜೀವ ನಡೆವಳಿಕೆ.
-
ಪರಮ ಪೂಜನೀಯ ಶ್ರೀ ಗುರೂಜಿ
55.
ಸುಳ್ಳು ಹೇಳದಿರು. ಸತ್ಯಸಂಧನಾಗು. ವಿವೇಕದಿಂದ, ನಿರ್ಭೀತಿಯಿಂದ ಹಾಗೂ ಪ್ರೀತಿ ತುಂಬಿದ ಹೃದಯದಿಂದ ಸತ್ಯವನ್ನೇ ನುಡಿ.
ಸುಳ್ಳು ಹೇಳದಿರು. ಸತ್ಯಸಂಧನಾಗು. ವಿವೇಕದಿಂದ, ನಿರ್ಭೀತಿಯಿಂದ ಹಾಗೂ ಪ್ರೀತಿ ತುಂಬಿದ ಹೃದಯದಿಂದ ಸತ್ಯವನ್ನೇ ನುಡಿ.
-
ಗೌತಮ ಬುದ್ಧ
56.
ಮನಸ್ಸಿನ ಕೊಳೆಯನ್ನು ತೊಳೆಯುವುದೇ ಧರ್ಮ.
ಮನಸ್ಸಿನ ಕೊಳೆಯನ್ನು ತೊಳೆಯುವುದೇ ಧರ್ಮ.
-
ಡಾ|| ಅಂಬೇಡ್ಕರ್
57.
ಸಂತತಿಯಿಂದಲ್ಲ, ಧನದಿಂದಲ್ಲ, ತ್ಯಾಗದಿಂದ ಮಾತ್ರ ಅಮೃತತ್ವವನ್ನು ಪಡೆಯಲು ಸಾಧ್ಯ.
ಸಂತತಿಯಿಂದಲ್ಲ, ಧನದಿಂದಲ್ಲ, ತ್ಯಾಗದಿಂದ ಮಾತ್ರ ಅಮೃತತ್ವವನ್ನು ಪಡೆಯಲು ಸಾಧ್ಯ.
-
ಸ್ವಾಮಿ ವಿವೇಕಾನಂದ
58.
ಯಾರು ದೀನರಲ್ಲಿ, ದುರ್ಬಲರಲ್ಲಿ, ರೋಗಿಗಳಲ್ಲಿ ಶಿವನನ್ನು ನೋಡುವರೋ ಅವರೇ ನಿಜವಾದ ಶಿವನನ್ನು ಪೂಜಿಸುವವರು.
ಯಾರು ದೀನರಲ್ಲಿ, ದುರ್ಬಲರಲ್ಲಿ, ರೋಗಿಗಳಲ್ಲಿ ಶಿವನನ್ನು ನೋಡುವರೋ ಅವರೇ ನಿಜವಾದ ಶಿವನನ್ನು ಪೂಜಿಸುವವರು.
-
ಸ್ವಾಮಿ ವಿವೇಕಾನಂದ
59.
ನಿನ್ನ ಮಾತು, ನಡತೆ ಹಾಗೂ ಸಾಧನೆ ಇವುಗಳಲ್ಲಿ ಪ್ರಾಮಾಣಿಕನಾಗಿರು. ಇದರಿಂದ ನೀನು ಧನ್ಯನಾಗುವೆ.
ನಿನ್ನ ಮಾತು, ನಡತೆ ಹಾಗೂ ಸಾಧನೆ ಇವುಗಳಲ್ಲಿ ಪ್ರಾಮಾಣಿಕನಾಗಿರು. ಇದರಿಂದ ನೀನು ಧನ್ಯನಾಗುವೆ.
-
ಶಾರದಾ ಮಾತೆ
60.
ದೊಡ್ಡ ಮನಸ್ಸಿನಿಂದ ಮಾಡಿದ ಸಣ್ಣ ಕಾರ್ಯಗಳೂ ಸಣ್ಣ ಮನಸ್ಸಿನಿಂದ ಮಾಡಿದ ದೊಡ್ಡ ಕಾರ್ಯಗಳಿಗಿಂತ ಎಷ್ಟೋ ಶ್ರೇಷ್ಠವಾದವು
ದೊಡ್ಡ ಮನಸ್ಸಿನಿಂದ ಮಾಡಿದ ಸಣ್ಣ ಕಾರ್ಯಗಳೂ ಸಣ್ಣ ಮನಸ್ಸಿನಿಂದ ಮಾಡಿದ ದೊಡ್ಡ ಕಾರ್ಯಗಳಿಗಿಂತ ಎಷ್ಟೋ ಶ್ರೇಷ್ಠವಾದವು
-
ಕುವೆಂಪು
61.
"ಹೇ ಗೌರೀನಾಥ, ಹೇ ಜಗನ್ಮಾತೆ, ಪೌರುಷವನ್ನು ಎಮಗೆ ದಯಪಾಲಿಸು. ಹೇ ಸರ್ವಶಕ್ತಿಶಾಲಿನಿ, ನಮ್ಮ ದೌರ್ಬಲ್ಯವನ್ನು ದಹಿಸು, ಕ್ಲೈಬ್ಯವನ್ನು ಹೋಗಲಾಡಿಸು. ನಮ್ಮ ಷಂಡತನವನ್ನು ತೊಲಗಿಸು, ಪುರುಷಸಿಂಹರನ್ನಾಗಿ ಮಾಡು."
"ಹೇ ಗೌರೀನಾಥ, ಹೇ ಜಗನ್ಮಾತೆ, ಪೌರುಷವನ್ನು ಎಮಗೆ ದಯಪಾಲಿಸು. ಹೇ ಸರ್ವಶಕ್ತಿಶಾಲಿನಿ, ನಮ್ಮ ದೌರ್ಬಲ್ಯವನ್ನು ದಹಿಸು, ಕ್ಲೈಬ್ಯವನ್ನು ಹೋಗಲಾಡಿಸು. ನಮ್ಮ ಷಂಡತನವನ್ನು ತೊಲಗಿಸು, ಪುರುಷಸಿಂಹರನ್ನಾಗಿ ಮಾಡು."
-
ಸ್ವಾಮಿ ವಿವೇಕಾನಂದ
62.
ಸರ್ವ ಪ್ರಯತ್ನದಿಂದ ತನ್ನ ದುರ್ಬಲತೆಯನ್ನು ತೊಡೆದು ಹಾಕಿ ಬಲಿಷ್ಠವಾಗುವುದೇ ದುರ್ಬಲ ಸಮಾಜವೊಂದರ ಅತಿ ಶ್ರೇಷ್ಠ ಕರ್ತವ್ಯ.
ಸರ್ವ ಪ್ರಯತ್ನದಿಂದ ತನ್ನ ದುರ್ಬಲತೆಯನ್ನು ತೊಡೆದು ಹಾಕಿ ಬಲಿಷ್ಠವಾಗುವುದೇ ದುರ್ಬಲ ಸಮಾಜವೊಂದರ ಅತಿ ಶ್ರೇಷ್ಠ ಕರ್ತವ್ಯ.
-
ಪರಮ ಪೂಜನೀಯ ಡಾಕ್ಟರ್ಜಿ
63.
ಈ ನಶ್ವರ ಜಗತ್ತಿನಲ್ಲಿ ಎಲ್ಲವೂ ನಶಿಸಬಹುದು. ಆದರೆ ಭಾವನೆಗಳು, ಕನಸುಗಳು, ವಿಚಾರಗಳು ಎಂದೂ ಸಾಯಲಾರವು.
ಈ ನಶ್ವರ ಜಗತ್ತಿನಲ್ಲಿ ಎಲ್ಲವೂ ನಶಿಸಬಹುದು. ಆದರೆ ಭಾವನೆಗಳು, ಕನಸುಗಳು, ವಿಚಾರಗಳು ಎಂದೂ ಸಾಯಲಾರವು.
-
ನೇತಾಜಿ ಸುಭಾಷ್ಚಂದ್ರ ಬೋಸ್
64.
ಹುಡುಕಿ ಹುಡುಕಿ ಒಳ್ಳೆಯ ಮಾತನ್ನೇ ಆಡಬೇಕು. ಅದನ್ನು ಹಿತವಾಗುವಂತೆ ಹೇಳಬೇಕು. ಇದೇ ಧರ್ಮ
ಹುಡುಕಿ ಹುಡುಕಿ ಒಳ್ಳೆಯ ಮಾತನ್ನೇ ಆಡಬೇಕು. ಅದನ್ನು ಹಿತವಾಗುವಂತೆ ಹೇಳಬೇಕು. ಇದೇ ಧರ್ಮ
-
ತಿರುವಳ್ಳೂವರ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ